ರಾಜಕೀಯ ಸುದ್ದಿ

ತಮಿಳುನಾಡಿನಲ್ಲಿ ಅಪಘಾತ: ರಾಜ್ಯದ ಪೊಲೀಸರು ಸಾವು

Share It


ಬೆಂಗಳೂರು: ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ ಮತ್ತು ಕಾನ್ಸ್​ಟೇಬಲ್​ಗಳು​​ ​​ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಧರ್ಮಪುರಿ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ರಾಜ್ಯದ ಮೀಸಲು ಪಡೆಯನ್ನು ಕಳುಹಿಸಿಕೊಡಲಾಗಿತ್ತು. ಗುರುವಾರ ಸಂಜೆ 5.30ರಲ್ಲಿ ತಿರುವಣ್ಣಾಮಲೈನಿಂದ ದಿಂಡಿವಣ್ಣಂ ಕಡೆಗೆ ಜೀಪ್‌ನಲ್ಲಿ ಐವರು ಅಧಿಕಾರಿ ಮತ್ತು ಸಿಬ್ಬಂದಿ ತೆರಳುತ್ತಿದ್ದರು.

ಕಮಾಂಡೆಂಟ್ ಪ್ರಭಾಕರ್​ ಜೀಪ್‌ನ ಮುಂಭಾಗ ಕುಳಿತಿದ್ದರು. ಹಿಂಭಾಗದಲ್ಲಿ ಕಾನ್ಸ್​ಟೇಬಲ್ ವಿಠಲ್, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಹಾಗೂ ತಮಿಳುನಾಡಿನ ಸಿಬ್ಬಂದಿ, ಕಾನ್ಸ್​​ಟೇಬಲ್​ ಇದ್ದರು.

ಮಾರ್ಗ ಮಧ್ಯೆೆ ಅತಿ ವೇಗವಾಗಿ ಬಂದ ತಮಿಳುನಾಡಿನ ಸಾರಿಗೆ ಬಸ್​​ ಇವರ ಜೀಪಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಭಾಕರ್​, ವಿಠಲ್, ತಮಿಳುನಾಡಿನ ದಿನೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಹಾಗೂ ಮತ್ತೊಬ್ಬ ಕಾನ್ಸ್​ಟೇಬಲ್​ ಗಾಯಗೊಂಡಿದ್ದಾರೆ.

ಕರ್ನಾಟಕ ಮೀಸಲು ಪಡೆಯ ಕೋರಮಂಗಲದ 3ನೇ ಬೆಟಾಲಿಯನ್‌ನ 3ನೇ ಸಹಾಯಕ ಕಮಾಂಡೆಂಟ್​​ ಟಿ.ಪ್ರಭಾಕರ್​ ಮತ್ತು ವಿಜಯಪುರದ ಐಆರ್‌ಬಿ (ಇಂಡಿಯನ್ ರಿಸರ್ವ್​ ಬೆಟಾಲಿಯನ್) ಕಾನ್ಸ್​ಟೇಬಲ್​ ವಿಠಲ್​ ಗಡಾಧರ್, ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಜಯಪುರದ ಐಆರ್‌ಬಿ ಡೆಪ್ಯೂಟಿ ಕಮಾಂಡೆಂಟ್ ಯು.ಎನ್.ಹೇಮಂತ್​ ಕುಮಾರ್ ಮತ್ತು ಕಾನ್ಸ್​ಟೇಬಲ್​ ಜಯಕುಮಾರ್ ಗಂಭೀರ ಗಾಯಗೊಂಡಿದ್ದಾರೆ. ಅವರಿಗೆ ಸಮೀಪದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆೆಗೆ ದಾಖಲಿಸಲಾಗಿದೆ.


Share It

You cannot copy content of this page