ಬೆಂಗಳೂರು: ಸದಾ ರಾಷ್ಟ್ರಭಕ್ತಿಯ ಮಾತುಗಳನ್ನೇ ಆಡುವ ಬಿಜೆಪಿ ನಾಯಕರು ಮತ್ತೊಮ್ಮೆ ತಮ್ಮ ಅವಿವೇಕತನ ಮರೆದಿದ್ದು, ಸ್ವೀಟ್ ತಿಂದು ರಾಷ್ಟ್ರಧ್ವಜಕ್ಕೆ ಕೈ ಒರೆಸಿಕೊಂಡಿರುವ ಘಟನೆ ನಡೆದಿದೆ.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ಬೆಂಬಲಿಗರು ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ್ ದಾಳಿಯ ಸಂಭ್ರಮ ಆಚರಣೆ ಮಾಡಲು ಸಿಹಿ ಹಂಚುತ್ತಿದ್ದರು. ಈ ವೇಳೆ ಈ ಅನಾಚಾರ ನಡೆದಿದೆ.
ಶಾಸಕ ರಾಮಮೂರ್ತಿ ಮತ್ತು ಬೆಂಬಲಿಗರು ಸಾರ್ವಜನಿಕರಿಗೆ ಲಾಡು ಹಂಚಿ, ಸಂಭ್ರಮ ಆಚರಣೆ ಮಾಡುತ್ತಿದ್ದರು. ಆ ವೇಳೆ ಶಾಸಕರ ಪಕ್ಕದಲ್ಲೇ ಇದ್ದ ಬಿಜೆಪಿ ಮುಖಂಡನೊಬ್ಬ, ಸಿಹಿ ಹಂಚಿದ ಕೈ ತೆಗೆದು ರಾಷ್ಟ್ರಧ್ವಜಕ್ಕೆ ಒರೆಸಿಕೊಂಡರು. ಇದನ್ನು ಶಾಸಕ ರಾಮಮೂರ್ತಿ ನೋಡುತ್ತಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದು ತಪ್ಪು ಎಂದೂ ಆತನಿಗೆ ಹೇಳುವ ಪ್ರಯತ್ನ ಮಾಡಲಿಲ್ಲ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಬಿಜೆಪಿ ನಾಯಕರ ನಕಲಿ ರಾಷ್ಟ್ರಭಕ್ತಿ ಈ ಮೂಲಕ ಸಾಭೀತಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನಿಸಿದ ಶಾಸಕ ಹಾಗೂ ಅವರ ಬೆಂಬಲಿಗರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕೆಲವರು ಆಗ್ರಹಿಸಿದ್ದಾರೆ.