ರಾಜಕೀಯ ಸುದ್ದಿ

ದಲಿತ ನಾಯಕನ ಕೈಹಿಡಿದು ಉಪರಾಷ್ಟ್ರಪತಿ ಧನಕರ್ ಅವರು ಬಿಎಸ್ವೈಗೆ ಹೇಳಿದ್ದೇನು?

Share It

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇದೀಗ ಬಿಜೆಪಿ ಪಾಳೆಯದಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಉಪರಾಷ್ಟ್ರಪತಿ ಧನಕರ್ ಅವರ ಆಗಮನದ ವೇಳೆ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಗಮನ ಸೆಳೆದರು.

ಒಂದು ಕಾಲದಲ್ಲಿ ಬಿಎಸ್ವೈ ಆಪ್ತರಾಗಿದ್ದ ಡಿ.ಎಸ್. ವೀರಯ್ಯ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೂಲೆಗುಂಪಾಗಿದ್ದರು. ಅವರದಲ್ಲದ ತಪ್ಪಿದೆ ಅವರನ್ನು ದೇವರಾಜು ಅರಸು ಟ್ರಕ್ ಅಂಡ್ ಟರ್ಮಿನಲ್ ಹಗರದಲ್ಲಿ ಸಿಲುಕಿಸಿ ಬಂಧಿಸಲಾಗಿತ್ತು. ರಾಜಕೀಯವಾಗಿಯೂ ಅವರಿಗೆ ಯಾವುದೇ ಸ್ಥಾನಮಾನ ನೀಡದೆ, ಅವರನ್ನು ಮೂಲೆಗುಂಪು ಮಾಡಲಾಗಿತ್ತು.

ಇದೀಗ ಡಿ.ಎಸ್. ವೀರಯ್ಯ ಅವರ ಮೇಲಿನ ಆರೋಪ ಸುಳ್ಳು ಎಂದು ಹೈಕೋರ್ಟ್ ತೀರ್ಪು ನೀಡಿ, ಅವರ ಮೇಲಿದ್ದ ಪ್ರಕರಣ ವಜಾಗೊಳಿಸಿದೆ. ಇದರಿಂದ ನಿರಾಳವಾಗಿರುವ ವೀರಯ್ಯ ಅವರಿಗೆ ಇದೀಗ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಬುಲಾವ್ ಬಂದಿದೆ. ಇದರ ಭಾಗವಾಗಿ, ಉಪರಾಷ್ಟ್ರಪತಿ ಸ್ವತಃ ವೀರಯ್ಯ ಅವರ ಕೈಹಿಡಿದು ಬಿ.ಎಸ್.ವೈ ಅವರ ಮುಂದೆ ವೀರಯ್ಯ ಅವರಿಗೆ ಪಕ್ಷದಲ್ಲಿ ಸಿಗಬಹುದಾದ ಸ್ಥಾನಮಾನದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಬಿಜೆಪಿ ಸಂಘಟನೆ ಮಾಡುವ ಸಂದರ್ಭದಲ್ಲಿ ಅವರಿಗೆ ಸಾಥ್ ನೀಡಿದ್ದ ವೀರಯ್ಯ, ದಲಿತ ಮತಗಳು ಬಿಜೆಪಿ ಕಡೆಗೆ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕೋಲಾರದಲ್ಲಿ ಕೆ.ಎಚ್. ಮುನಿಯಪ್ಪ ಅವರಂತಹ ನಾಯಕರ ಮುಂದೆ ಕಡಿಮೆ ಅಂತರದಲ್ಲಿ ಸೋತರೂ, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹಂತದಲ್ಲಿ ಅವರಿಗೆ ಟಿಕೆಟ್ ನೀಡಲಿಲ್ಲ.

ಅನಂತರ ಕೇಂದ್ರ ಸ್ಥಾನಮಾನದ ಭರವಸೆ ನೀಡಲಾಗಿತ್ತು. ವಿಧಾನ ಪರಿಷತ್ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ರಾಜಕೀಯ ದ್ವೇಷಕ್ಕೆ ಸರಕಾರ ಅವರನ್ನು ಬಂಧಿಸಿತು. ಹೀಗಾಗಿ, ಡಿ.ಎಸ್. ವೀರಯ್ಯ ಮತ್ತೊಮ್ಮೆ ಬಿಎಸ್ವೈ ಪಾಳೆಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ದೂರಾಗುತ್ತಿರುವ ದಲಿತ ಮತಗಳನ್ನು ಸೆಳೆಯಲು ವೀರಯ್ಯ ಪ್ರಬಲ ಅಸ್ತ್ರವಾಗಲಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.


Share It

You cannot copy content of this page