ಅಪರಾಧ ಸುದ್ದಿ

ಬೆಳಗಾವಿ: ಸಿಡಿಲು ಬಡಿದು ರೈತ ಸಾವು

Share It

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ನೇಸರಗಿ ಸಮೀಪ ಬುಧವಾರ ಸಂಜೆ ಸಿಡಿಲು ಬಡಿದು ರೈತರ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಕರಿಕಟ್ಟಿಯ ಬಸವರಾಜ ನಾಗಪ್ಪ ಸಂಗೊಳ್ಳಿ (35) ಮೃತಪಟ್ಟವರು. ಬಸವರಾಜ ಅವರ ಪತ್ನಿ ಹಾಗೂ ಇನ್ನಿಬ್ಬರು ಗಾಯಗೊಂಡಿದ್ದಾರೆ. ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ಕೂ ಜನ ಹೊಲದ ಕೆಲಸ ಮುಗಿಸಿ ಮನೆಗೆ ಮರಳುವಾಗ ಸಿಡಿಲು ಬಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page