ಬಾಗಲಕೋಟ: ನವನಗರದಲ್ಲಿರುವ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರ ಮನೆಯಲ್ಲಿ ಹಾವೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಪಡಸಲಾಗಿ ಅವರ ಸರಕಾರಿ ನಿವಾಸದಲ್ಲಿ ವೈಪರ್ ತಳಿಯ ಹಾವು ಕಾಣಿಸಿಕೊಂಡಿದೆ. ಈ ವೇಳೆ ಉರಗ ತಜ್ಞ ರಾಜು ಅವರನ್ನು ಕರೆಯಿಸಿ ಹಾವನ್ನು ಹಿಡಿಯಲಾಗಿದೆ
ಹಾವನ್ನು ರಕ್ಷಣೆ ಮಾಡಿದ ಉರುಗ ತಜ್ಞ ರಾಜು ಆನಂತರ ಹಾವನ್ನು ಕಾಡಿಗೆ ಬಿಟ್ಟಿದ್ದಾರೆ. ನ್ಯಾಯದೀಶರ ಮನೆಯಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಕೆಲ ಕಲಾ ಕುಕುಂಬದ ಸದಸ್ಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

