ಚನ್ನರಾಯಪಟ್ಟಣ: ಜನನಿ ಸೇವಾ ಫೌಂಡೇಶನ್ ಸಂಸ್ಥೆಯ ವತಿಯಿಂದ ದಿನಾಂಕ: 06/07/2026ನೇ ಸೋಮವಾರ ವಿಶ್ವ ಪರಿಸರ ದಿನದ ಅಂಗವಾಗಿ ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಕುರುವಂಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಗಿಡಗಳನ್ನು ವಿತರಿಸುವುದು, ನೋಟ್ ಬುಕ್, ಪೆನ್ , ಪೆನ್ಸಿಲ್ ಮತ್ತು ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ R ಕುರುವಂಕ ರವರು ಪರಿಸರ ಸಂರಕ್ಷಣೆ ಹಾಗೂ ಶೈಕ್ಷಣಿಕವಾಗಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಹಾಗೂ ಉಳಿಯಬೇಕು ಅವುಗಳು ಉಳಿದರೆ ಬಡವರಿಗೆ ವಿದ್ಯೆ ಸಿಗುತ್ತದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ R ಕುರುವಂಕ, ಉಪಾಧ್ಯಕ್ಷರಾದ ರುದ್ರೇಶ್ ಬಾಲಚಂದ್ರನ್ರವರು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜೆ, ಕಾರ್ಯದರ್ಶಿ ರಮೇಶ್ B M, ಖಜಾಂಚಿ ವಿನೋದ್ ಪ್ರಸಾದ್ H M ಭಾಗವಹಿಸಿದ್ದರು. ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯಾದ ಕಮಲಮ್ಮ ರವರು, SDMC ಅಧ್ಯಕ್ಷರಾದ ಧನಲಕ್ಷ್ಮಿ ರವರು, ಗ್ರಾಮದ ಮುಖಂಡರಾದ ಗಂಗಾಧರ್ ರವರು, ಸಿದ್ದೇಗೌಡ ರವರು ಮತ್ತು ಎಲ್ಲಾ ವಿದ್ಯಾರ್ಥಿಗಳ ಪೋಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.

