ಕ್ರೀಡೆ ಸುದ್ದಿ

ಕಪ್ ಮೇಲೆ ಕಪ್ ಗೆಲ್ಲೋ ಕಮ್ಮಿನ್ಸ್ ಗೆ ಒಲಿಯುತ್ತಾ ಮತ್ತೊಂದು ಕಪ್ !

Share It

ಚೆನ್ನೈ: ಕೆಲವ್ರು ಮುಟ್ಟಿದೆಲ್ಲ ಚಿನ್ನವಾಗುತ್ತೆ ಅಂತಾರೆ, ಅದೇ ರೀತಿ ಈ ಆಸ್ಟ್ರೇಲಿಯಾ ಆಟಗಾರ ನಾಯಕನಾಗಿ ಆಡುವಾಗೆಲ್ಲ ಕಪ್ ಗೆಲ್ಲೋದು ಅಭ್ಯಾಸವಾಗಿಬಿಟ್ಟಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಸ್ಟ್ರೇಲಿಯಾಗೆ ವಿಶ್ವಕಪ್ ತಂದುಕೊಟ್ಟಿರುವ ಕಮ್ಮಿನ್ಸ್ ಸನ್ ರೈಸರ‍್ಸ್ ಹೈದರಾಬಾದ್‌ಗೂ ಕಪ್ ಗೆದ್ದು ಕೊಡ್ತಾರಾ ಎಂಬ ಕುತೂಹಲ ಫೈನಲ್ ಪಂದ್ಯದ ಮೇಲಿದೆ.

ಟಾಟಾ ಐಪಿಎಲ್‌ನ 17 ನೇ ಆವೃತ್ತಿಯ ಫೈನಲ್ ಪಂದ್ಯ ಚೆನ್ನೈನಲ್ಲಿ ಇಂದು ಸಂಜೆ 7 ಗಂಟೆಗೆ ನಡೆಯಲಿದ್ದು, ಕೊಲ್ಕತ್ತಾ ನೈಟ್ ರೈಡರ‍್ಸ್ ಮತ್ತು ಸನ್ ರೈಸರ‍್ಸ್ ಹೈದರಾಬಾದ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಲೀಗ್ ಹಂತದ ಎಲ್ಲ ಪಂದ್ಯಗಳಲ್ಲಿ ಉತ್ತಮ ಆಡವಾಡಿ ಫೈನಲ್‌ಗೆ ಲಗ್ಗೆಯಿಟ್ಟಿರುವ ಕೊಲ್ಕತ್ತಾ ಮತ್ತೊಂದೆಡೆ, ಲೀಗ್‌ನಲ್ಲಿ ಭರ್ಜರಿ ಆರಂಭ ಪಡೆದರೂ, ನಂತರ ಕಷ್ಟಪಟ್ಟು ಪ್ಲೇ ಆಪ್ ಪ್ರವೇಶಿಸಿದ ಎಸ್‌ಆರ್‌ಎಚ್ ತಂಡಗಳು ಬಲಾಬಲದ ದೃಷ್ಟಿಯಿಂದ ಸಮಬಲದಿಂದ ಕೂಡಿವೆ.

ಕೊಲ್ಕತ್ತಾ ತಂಡ ಈಗಾಗಲೇ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದು, ಇದೀಗ ಮೂರನೇ ಬಾರಿ ಟ್ರೋಪಿ ಮೇಲೆ ಕಣ್ಣಿಟ್ಟಿದೆ. ಸನ್ ರೈಸರ‍್ಸ್ ಎರಡನೇ ಟ್ರೋಪಿ ಗೆಲ್ಲುವ ತವಕದಲ್ಲಿದೆ. ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಚಾಂಪಿಯನ್ ಶಿಫ್, ಏಕದಿನ ವಿಶ್ವಕಪ್ ಮತ್ತು ಟಿ-20 ವಿಶ್ವಕಪ್ ಮೂದು ಮಾದರಿಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾಗೆ ಕಪ್ ಗೆಲ್ಲಿಸಿಕೊಟ್ಟ ನಾಯಕ ಎನಿಸಿಕೊಂಡಿದ್ದಾರೆ. ಜತೆಗೆ ಟೂರ್ನಿಯಲ್ಲಿ ದುಬಾರಿ ಆಟಗಾರರೂ ಹೌದು.

ಈವರೆಗೆ ಈ ಎರಡು ತಂಡಗಳು 27 ಬಾರಿ ಮುಖಾಮುಖಿಯಾಗಿದ್ದು, ಕೊಲ್ಕತ್ತಾ ತಂಡ 28 ಬಾರಿ ಗೆಲುವು ಸಾಧಿಸಿದೆ. ಹೈದ್ರಾಬಾದ್ 9 ಸಲ ಗೆಲುವು ಸಾಧಿಸಿದೆ. ಲೀಗ್ ಹಂತದ ಎರಡು ಪಂದ್ಯಗಳಲ್ಲಿ ಸನ್ ರೈಸರ‍್ಸ್ ಸೋಲು ಅನುಭವಿಸಿದ್ದು, ಆ ಸೋಲಿಗೆ ಫೈನಲ್‌ನಲ್ಲಿಯೇ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಲೀಗ್ ಹಂತದುದ್ದಕ್ಕೂ ಬೃಹತ್ ಮೊತ್ತ ಕಲೆಹಾಕುವುದಕ್ಕೆ ಹೆಸರುವಾಸಿಯಾಗಿರುವ ಎಸ್‌ಆರ್‌ಎಚ್, ಫೈನಲ್‌ನಲ್ಲಿಯೂ ಅಂತಹದ್ದೇ ಬೃಹತ್ ಮೊತ್ತ ಗಳಿಸಿ ದಾಖಲೆ ಬರೆಯುತ್ತಾ ಕಾದು ನೋಡಬೇಕಿದೆ.

ಟ್ರಾವಿಸ್ ಹೆಡ್, ಅಭೀಶೇಕ್ ಶರ್ಮಾ ಎಸ್‌ಆರ್‌ಎಚ್ ಆರಂಭಿಕ ಸ್ಫೋಟಕ ಬ್ಯಾಟರ್‌ಗಳಾಗಿದ್ದು, ಕ್ಲಾಸೆನ್, ರಾಹುಲ್ ತ್ರಿಪಾಠಿ, ಆಡೆನ್ ಮಾಕ್ರೆಮ್, ನಿತೀಶ್ ರೆಡ್ಡಿ ಅಂತಹ ಸ್ಫೋಟಕ ಬ್ಯಾಟಿಂಗ್ ಪಡೆ ಹೈದ್ರಬಾದ್ ಕಡೆಯಿದೆ. ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಪ್ಯಾಟ್ ಕಮ್ಮಿನ್ಸ್, ಮಯಾಂಕ್ ಮಾರ್ಕಂಡೇಯ ಬೌಲಿಂಗ್ ಬಲವಾಗಿದ್ದಾರೆ. ಅದೇ ರೀತಿ ಕೊಲ್ಕತ್ತಾ ಕೂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದು, ಆರಂಭಿಕ ಸುನೀಲ್ ನರೈನ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಜತೆಗೆ ಬೌಲಿಂಗ್ ನಲ್ಲಿಯೂ ಕೊಲ್ಕತ್ತಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ನಾಯಕ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ಯು ರಸೆಲ್ ಕೊಲ್ಕತ್ತಾ ತಂಡದ ಬಲವಾಗಿದ್ದರೆ, ಬೌಲಿಂಗ್‌ನಲ್ಲಿ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಲಯಕ್ಕೆ ಮರಳಿರುವುದು ಕೊಲ್ಕತ್ತಾ ಬೌಲಿಂಗ್ ಬಲವನ್ನು ಹೆಚ್ಚಿಸಿದೆ. ವರುಣ್ ಚಕ್ರವರ್ತಿ, ಸುನೀಲ್ ನರೇಣ್ ಜೋಡಿ ಈವರೆಗೆ ಸ್ಪಿನ್ ಮೋಡಿ ಮಾಡಿ ಪಂದ್ಯ ಗೆಲ್ಲಿಸಿದೆ. ಇದೇ ಮೋಡಿ ಫೈನಲ್‌ನಲ್ಲಿ ಮುಂದುವರಿಯಬೇಕಿದೆ.


Share It

You cannot copy content of this page