ಬೆಂಗಳೂರು: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಹುತೇಕ ಸಂಘಟನೆಗಳು ಬೆಂಬಲ ನೀಡಿಲ್ಲ, ಹೀಗಾಗಿ ಬಂದ್ ಯಶಸ್ವಿಯಾಗುವುದು ಅನುಮಾನ ಎನ್ನಲಾಗಿದೆ.
CWRC ನೀಡಿದ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ತಮಿಳುನಾಡಿಗೆ ನೀರು ಹಾರಿಸುವುದು ಸಾಧ್ಯವಿಲ್ಲ ಎಂಬುದು ಹೋರಾಟಗಾರರ ವಾದವಾಗಿದೆ. ಸರಕಾರ ಕೂಡ ಇದೆ ವಾದವನ್ನು ಮಂಡಿಸಿದ್ದು, ಇದೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಎಂದು ಬೆಳಗ್ಗೆ ವಿಚಾರಣೆ ನಡೆಯಲಿದೆ.
ಸುಪ್ರೀಂ ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ಕರ್ಮ ಕೈಗೊಳ್ಳಲು ಸರಕಾರ ತೀರ್ಮಾನಿಸಿದ್ದು, ಇದಕ್ಕೆ ಮೊದಲೇ ನಡೆಯುತ್ತಿರುವ ಬಂದ ಅದ್ದರಿಂದ ಪ್ರತಿಭಟನೆಗೆ ಬೆಂಬಲ ಸಿಕ್ಕಿಲ್ಲ, ಸುಪ್ರೀಂ ಕೋರ್ಟ್ ನೀಡುವ ತೀರ್ಪಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆದರೆ, ಬಂದ್ ಮತ್ತಷ್ಟು ಕಾವೇರಲಿದೆ.

