ಹೊಸದಿಲ್ಲಿ : Governance Now ರವರು ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಅವರಿಗೆ PSU ಆತ್ಮನಿರ್ಭರ್ ನಾಯಕತ್ವ ಪ್ರಶಸ್ತಿ ಲಭಿಸಿದೆ.
ಸತೀಶ್ ಚಂದ್ರ ದುಬೆ, ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವರು, ಭಾರತ ಸರ್ಕಾರ ಮತ್ತು ಸತ್ಯಪಾಲ್ ಸಿಂಗ್, ಮಾಜಿ ಕೇಂದ್ರ ಸರ್ಕಾರದ ಮಾನ್ಯ ರಾಜ್ಯ ಸಚಿವರು ಮಾನವ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಮತ್ತು ಗಂಗಾ ನದಿ ಕಾಯಕಲ್ಪ ಇಲಾಖೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ನಿಗಮದಲ್ಲಿ ಒಟ್ಟು 1,314 ಬಸ್ಸುಗಳು ಪುನಶ್ಚೇತನಗೊಂಡಿದ್ದು, ಕರ್ನಾಟಕ ಸಾರಿಗೆ 1184 , ನಗರ ಸಾರಿಗೆ 115, ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳನ್ನು ಸಹ ಪುನಶ್ಚೇತನಗೊಳಿಸಲಾಗಿದೆ. 250 ಕೋಟಿ ರು.ಗೂ ಹೆಚ್ಚು ಹಣ ನಿಗಮಕ್ಕೆ ಉಳಿತಾಯವಾಗಿದ್ದು, ಸದರಿ ಉಪಕ್ರಮವು
ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ
ಸ್ವಾವಲಂಬನೆ ಉತ್ತೇಜಿಸುವ ಯೋಜನೆ ಅತ್ಯುತ್ತಮವಾಗಿದೆ.
ಬಿ.ಎಸ್. ನಾಗರಾಜ ಮೂರ್ತಿ, ಉಪಮುಖ್ಯ ಯಾಂತ್ರಿಕ ಅಭಿಯಂತರರು, ಕರಾರಸಾ ನಿಗಮ ರವರು ಸಹ ಉಪಸ್ಥಿತರಿದ್ದರು.